ಮಲ್ಲಿಗೆ

ಮಲ್ಲಿಗೆ! ಮಲ್ಲಿಗೆ!
ನಿನಗೆ ನಮಗೆ
ಎಲ್ಲಿಗೆಲ್ಲಿಗೆ ?

ಸಸ್ಯದೆದೆಯ ಸುಧಾರಸವೆ ಹೂವಾಗಿ
ಹಾಲು ಬಣ್ಣ ರೂಪದಲ್ಲಿ
ಪ್ರಕಟವಾಗುವಂತೆ
ಅರಳಿ ನಿಲ್ಲುವೆ.

ಸಸ್ಯಮಾತೆ, ಪ್ರೇಮ ಭಾವವೇ
ಪುಟ್ಟ ಪುಟ್ಟ ಸರಳ
ಸುಂದರ ನವಿರು ನವಿರು ದಳಗಳಾಗಿ
ಮೈದಾಳಿ ನಿಲ್ಲುವೆ.

ಸರಸ ಮನದ ಮಧುಕರ
ಸುತ್ತ ಮುತ್ತ ಹಾರುತ್ತ, ಹಾಡುತ್ತ
ಪ್ರೇಮಮುದ್ರೆಯೊತ್ತುವ
ಜೀವ ಕ್ರಿಯೆ ಸಾಗಿಸುವ ದೃಶ್ಯ
ಬಹು ಆಪೇಕ್ಷಿತ.

ಸಸ್ಯ ಸಂತನಾತ್ಮನು
ಪೂರ್ಣವಾಗಿ ಪ್ರಕಾಶಿಸಿ
ಸಿಹಿಸಿಹಿ ಸತ್ಯ ಗಂಧ ಬೀರಿ
ಸರ್ವ ಜೀವ ಪ್ರಭಾವಿಸಿ
ಧನ್ಯತೆಯ ಹೊಂದುವೆ.

ನೂರುಕಾಲ ಬದುಕಿ ಬಂದಿತೇನು?
ಕ್ಷಣ ಬದುಕಿ ಸಲ್ಲುವೆ
ಎಲ್ಲದರಲಿ ಎಲ್ಲರಿಗೂ ಎಲ್ಲಾ ಕಾಲ
ಆ ಸರ್ವೇಶನಿಗಿದು ಸಾಧ್ಯವೋ…!
ಬಲ್ಲೆನಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಬಳೆ
Next post ಪರಿಪರಿಯೊಳನ್ನ ಜಾರುವನ್ನಾತಂಕ ತರವಲ್ಲವೆನ್ನುವಿರಾ ?

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys